Monday 24 August 2015

~: ಆದರ್ಶ ಶಿಕ್ಷಣ :~

~: ಆದರ್ಶ ಶಿಕ್ಷಣ :~
Perfect Education

ಇಂದಿನ ಶಿಕ್ಷಣವೇ ವಿಚಿತ್ರವಾಗೆದೆ. ಇಂದಿನ ಶಿಕ್ಷಣದಿಂದ ತಲೆ ದೊಡ್ಡದಾಗ ಬಹುದೆಂಬ ವಿನಾ ಹೃದಯ ವಿಕಾಸವಾಗಲಾರದು. ಈ ಶುಷ್ಕ ಶಿಕ್ಷಣದಿಂದಲೇ ಇಂದು ಸಮಾಜದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ನೀತಿ ಮಟ್ಟ ಕಡಿಮೆಯಾಗುತ್ತಲಿದೆ. ನೈತಿಕ-ಧಾರ್ಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಇಂದಿನ ಶಾಲೆ ಕಾಲೇಜುಗಳಲ್ಲಿ ಕೊಡುತ್ತಿಲ್ಲವಾದ್ದರಿಂದ ಹೆಚ್ಚಿನ ನಾಗರಿಕರು ಅನೀತಿವಂತರಾಗುತ್ತಿದ್ದಾರೆ. ಹಳ್ಳಿಯ ಮತ್ತು ಅಜ್ಞ ಜನರನ್ನು ನಾನಾ ಬಗೆಯಿಂದ ವಂಚಿಸ ದುಡ್ಡು ಉಚ್ಚುತ್ತಿದ್ದಾರೆ. ನಾವು ಪಡೆದ ಜ್ಞಾನ ಅಜ್ಞ ಜನರನ್ನು ಮೋಸಗೊಳಿಸಲಿಕ್ಕಲ್ಲ; ಅಜ್ಞ ಜನರನ್ನು ಸುಜ್ಞಾನಿಗಳನ್ನಾಗಿ ಮಾಡಿ, ಸಮಾಜದ ಏಳಿಗೆಯನ್ನು ಮಾಡುವುದಕ್ಕಾಗಿಯೇ ಎಂಬುದನ್ನು ಗಮನಿಸಿದರೆ ಸಾಕು. ಶಿಕ್ಷಣದಿಂದ ನಮ್ಮ ಮೈದಾಳಬೇಕು. ಕಾಯಕದ ಘನತೆ (Dignity of labour) ಯನ್ನು ಅಳವಡಿಸಿಕೊಳ್ಳಬೇಕು.ಆದರೆ ಇಂದಿನ school Collegeಗಳಲ್ಲಿದೊರೆಯುವ ಶಿಕ್ಷಣ ತುಂಬಾ ಶುಷ್ಕವಾಗಿದೆಯೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅನೇಕ ತಪ್ಪು ಕಲ್ಪನೆಗಳು ಇಂದು ಕಲಿತವರಲ್ಲಿ ಸೇರಿವೆ. ಅದರಲ್ಲಿಯೂ ಭಾರತವು ತನ್ನ ಆಧ್ಯಾತ್ಮಿಕತೆಯ ದಿವಾಳಿಯನ್ನು ತೆಗೆಯಬಾರದೆಂದಿದ್ದರೆ, ನಮ್ಮ ತರುಣರಿಗೆ (Youth) ಧಾರ್ಮಿಕ ಶಿಕ್ಷಣವನ್ನು ಕೊಡುವದು ಮಹತ್ವದ್ದಾಗಿದೆಯೆಂದು ಮಹಾತ್ಮ ಗಾಂಧೀಜಿಯವರು ಹೇಳಿದ ಮಾತನ್ನು ನಾವು ನೆನಪಿನಲ್ಲಿಡಬೇಕು. ದೇಹ ಪರಿಶ್ರಮ (Manual Labour) ಕೀಳು ಎಂಬ ಮನೋಭವನೆ ಬೆಳೆದುಬಿಟ್ಟಿರುವುದರಿಂದ ರಾಷ್ಟ್ರದ ಅಭಿವೃದ್ಧಿಗೆ ಆತಂಕವಾಗುತ್ತಿದೆ.
~: ಸದ್ಗುರು ಸ್ವಾಮಿ ಲಿಂಗಾನಂದರು :~

For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html


1 comment: