Sunday 23 August 2015

~: ಎನ್ನ ತನ್ನಂತೆ ಮಾಡಿದ ಗುರು :~

~: ಎನ್ನ ತನ್ನಂತೆ ಮಾಡಿದ ಗುರು :~

"ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು ಎನ್ನ ಮಸ್ತಕದ ಮೇಲೆ ಇರಿಸಿದಾಗಲೆ ಎನ್ನ ಭವಂ ನಾಸ್ತಿಯಾಯಿತ್ತು, ಎನ್ನ ತನ್ನಂತೆ ಮಾಡಿದ...." ಎಂದು ಅಕ್ಕಮಹಾದೇವಿಯು ಹೇಳುವ ಮೇಲಿನ ವಚನದಲ್ಲಿ "ಎನ್ನ ತನ್ನಂತೆ ಮಾಡಿದ" ಎಂಬ ಪದಪುಂಜದಲ್ಲಿ ಅಪಾರವಾದ ಅರ್ಧವನ್ನಿಟ್ಟುದೇ ಅಲ್ಲದೆ ಧಾರ್ಮಿಕ ಸಮತೆಯ ತತ್ವವನ್ನು ಚಲ್ಲವರಿದಿದ್ದಾರೆ. ಗುರುವು ಶಷ್ಯನನ್ನು ಅನುಗ್ರಹಿಸಿ ತನ್ನಂತೆ ಮಾಡಿ ಕೊಳ್ಳುವ ಈ ಧಾರ್ಮಿಕ ಸಮತೆಯು ಬಸವ ಧರ್ಮದ ಅಗ್ಗಳಿಕೆ. ಗುರುವು ಪರುಷವಲ್ಲ, ಜ್ಯೋತಿಯೆಂದು ಶರಣರು ಸಾರಿ ಹೇಳಿಸಿದರು ಕರ್ಮವೇ ಧಾರ್ಮಿಕ ಸಮತೆಯಾಗಿದೆ. ಪರುಷವು ಕಬ್ಬಿಣವನ್ನು ಬಂಗಾರವನ್ನಾಗಿ ಮಾಡಬಹುದು, ಆದರೆ ಪರುಷವನ್ನಾಗಿ ಮಾಡಲಾರದು; ಅರ್ಥಾತ್ ತನ್ನಂತೆ ಮಾಡಿಕೋಳ್ಳಲಾರದು. ಪರುಷ-ಕಬ್ಬಿಣ ಸಂಬಂಧದಲ್ಲಿ ಸಮತೆಯ ತತ್ವವಿಲ್ಲ. ಆದರೆ ಜ್ಯೋತಿ ತನ್ನಂತೆ ಮಾಡಿಕೊಳ್ಳುತ್ತದೆ. ನಿಮ್ಮ ದೇಹವೇ ಪ್ರಣತೆ, ಭಕ್ತಿಯೇ ತೈಲ, ಆಚಾರವೇ ಬತ್ತಿ, ಗುರುವಿನ ಜ್ಞಾನ ಜ್ಯೋತಿ ನಿಮ್ಮ ಪ್ರಣತೆಗೆ ಮುಟ್ಟದಾಗ ನಿಮ್ಮಲ್ಲಿಯೂ ಆ ಜ್ಯೋತಿ ತೊಲಗಿ ಬೆಳಗುತ್ತದೆ. ಆ ಜ್ಯೋತಿ ಈ ಜ್ಯೋತಿಗಳೆರಡೂ ಒಂದೇ ವಿಧವಾಗಿ ತೊಳಗಿ ಬೆಳಗುತ್ತದೆ. ಆಹಾ! ಎಂಥ ಸುಂದರ ಉದಾತ್ತ ಧಾರ್ಮಿಕ ಸಮತೆಯ ಕಲ್ಪನೆಯಿದು!! ಆದರೆ ಭಕ್ತಿಯೆಂಬ ತೈಲ, ಆಚಾರವೆಂಬ ಬತ್ತಿ ಏಷ್ಯನ್ ತನುವೆಂಬ ಪ್ರಣತೆಯಲ್ಲಿಲ್ಲದಿದ್ದರೆ ಹೇಗೆ ತಾನೆ ಗುರುವು ಜ್ಯೋತಿಯನ್ನಂಟಿಸಬಲ್ಲ? .
~: ಸದ್ಗುರು ಸ್ವಾಮಿ ಲಿಂಗನಂದರು :~
For More
~: ಆದರ್ಶ ಶಿಕ್ಷಣ :~ http://linganandaswamiji.blogspot.com/2015/08/blog-post_61.html

~: ಎನ್ನ ತನ್ನಂತೆ ಮಾಡಿದ ಗುರು :~ http://linganandaswamiji.blogspot.com/2015/08/blog-post.html

~: ಧರ್ಮ ಮತ್ತು ಸಂಸ್ಕಾರ :~ http://linganandaswamiji.blogspot.com/2015/08/blog-post_59.html

~: ಗುರು ಅನುಗ್ರಹ :~ http://linganandaswamiji.blogspot.com/2015/08/blog-post_24.html

~: ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ :~ http://linganandaswamiji.blogspot.com/2015/08/blog-post_23.html

~: ಲಿಂಗದೀಕ್ಷೆಯ ಬಗ್ಗೆ ತಪ್ಪು ಕಲ್ಪನೆ :~ http://linganandaswamiji.blogspot.com/2015/08/blog-post_27.html


1 comment: